ಹೂವು

ಮುಂಜಾನೆ ಮೊಗ್ಗಾಗಿ
ಬಳ್ಳಿಯಲಿ ಒಡಮೂಡಿ
ಮಂದಹಾಸ ಬೀರುತಲಿ
ಅರಳಿ ನಗುವ ಸುಂದರ
ಪುಷ್ಪಗಳೆ..

ಪರಿಮಳವ ಬೀರಿ
ನಗೆಯ ಚೆಲ್ಲುತಲಿ
ಜನ ಮನವ ಆಕರ್ಷಿಸಿ
ಉದ್ಯಾನದಿ ಬೆರೆಯುವಂತೆ
ಮಾಡಿದ ಪುಷ್ಪಗಳೆ

ದೇವರಿಗೆ ಮುಡುಪಾಗಿ
ಪೂಜೆಯಲಿ ಒಂದಾಗಿ
ಭಕ್ತರ ಪಾಲಿಗೆ ಬೆಳಕಾಗಿ
ದೇವರ ಮುಡಿಯನೇರಿ
ಧನ್ಯತೆ ಪಡೆದ ಪುಷ್ಪಗಳೆ

ಬಳ್ಳಿಯಂತೆ ಬಳುಕುವ
ನಾರಿಯರ ನೀಳ ಕೇಶದ
ಮುಡಿಯ ಸೇರಿ ನಗುತ್ತಾ
ಮಂಗಳೆಯರ ಅಂದ ಹೆಚ್ಚಿಸಿದ
ಮಂದಾರ ಪುಷ್ಪಗಳೆ

ಬಾಡಿ ಹೋಗುವ ಮುನ್ನ
ಸಾವ ಮನೆ ಸೇರಿ
ಶಾಂತತೆಯ ಮೆರೆದು
ಮಡಿದ ದೇಹದ ಜೊತೆಗೆ
ಮರೆಯಾಗುವ ಪುಷ್ಪಗಳೆ

ಒಂದೇ ದಿನದಲ್ಲಿ ಅರಳಿ
ಬಾಡಿ ಬಿದ್ದು ಹೋಗುವ ನೀನು
ಅದೆಷ್ಟೋ ಜನೋಪಯೋಗಿ
ನನಗೂ ಕರುಣಿಸು ನಿನ್ನ ಸ್ವಭಾವ
ನಿನ್ನಂತೆ ಸುಮಧುರವಾಗಿ ಬಾಳುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿಗೆ ಪತ್ರ
Next post ಹಂತಗಳು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys